ಕನ್ನಡ ಚಿತ್ರಗಳು ಎಂದರೆ ಬರಿ ಪ್ಯಾಶನ್ಡ್ರಾಮಾ,ವ್, ಆಕ್ಷನ್, ಥ್ರಿಲ್ಲರ್ ಹಾಗೂ ಹಾರರ್ ಇವಿಷ್ಟನ್ನು ಮಾತ್ರಇಟ್ಟುಕೊಂಡು ಸಿನಿಮಾ ನಿರ್ಮಿಸುವುದುಎಂದಲ್ಲ. ಕಲಾತ್ಮಕ, ಲೈಫ್ಹಿಸ್ಟರಿಇಂತಹ ಅಂಶಗಳು ಇದ್ದರೆ ಅವುಗಳಲ್ಲಿನ ಅಂಶಗಳು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ಈ ಹಿಂದೆ ಬಂದಂತಹ ಹಲವಾರು ಚಿತ್ರಗಳು ನಿರೂಪಿಸಿವೆ. ಅಂತಹದ್ದೇಒಂದಷ್ಟು ವಿಷಯಗಳನ್ನು ತೆಗೆದುಕೊಂಡು ಮಾಡಿರುವಂತಹಕಮರ್ಷಿಯಲ್ಚಿತ್ರ ಬಣ್ಣ ಬಣ್ಣದ ಬದುಕು. ಬಣ್ಣದ ಬದುಕನ್ನು ನಂಬಿದಒಬ್ಬಯಕ್ಷಗಾನಕಲಾವಿದನಜೀವನದಕಥೆಯನ್ನಾಧಾರಿತ ಈ ಚಿತ್ರವನ್ನು ನಿರ್ಮಿಸಲಾಗಿದೆ.ಕರಾವಳಿ ಕರ್ನಾಟಕದಒಬ್ಬ ಬಡಯಕ್ಷಗಾನಕಲಾವಿದನಸುತ್ತಕಥೆ ಹೆಣೆಯಲಾದ ಈ ಚಿತ್ರಕ್ಕೆ ಪತ್ರಕರ್ತರಾದಇಸ್ಮಾಯಿಲ್ ಮೂಡುಶೆದ್ದೆಅವರುಕಥೆ-ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.ಕಾರ್ಕಳದ ಕೃಷ್ಣನಾಯ್ಕ, ಮಾ.ಗೌತಮ್, ಮಾ.ಗಗನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಶ್ರೀ ಮುತ್ತುರಾಮ್ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಕಾರ್ಕಳ, ಮಂಗಳೂರು, ತೀರ್ಥಹಳ್ಳಿ, ಪಿಲಿಕುಲ ಡಾ.ಶಿವರಾಂ ಕಾರಂತ ನಿಸರ್ಗಧಾಮ ಹಾಗೂ ನೇತ್ರಾವತಿ ನದಿ ತೀರದಲ್ಲಿಚಿತ್ರೀಕರಣ ನಡೆಸಲಾಗಿದ್ದು ಈಗಾಗಲೇ ಚಿತ್ರದಚಿತ್ರೀಕರಣ ಮುಕ್ತಾಯ ಹಂತತಲುಪಿದೆ.ಚಿತ್ರಕ್ಕೆ ವಿಜಯ್ಎಸ್ಛಾಯಾಗ್ರಹಣ, ಎ.ಕೆ.ವಿಜಯ್ ಕೋಕಿಲಾ ಸಂಗೀತ, ಶಶಿರಾಜ್ ಕಾವೂರ್, ಸುರೇಶ್ಆರ್.ಎಸ್, ಸಾಹಿತ್ಯ, ನಾಗೇಂದ್ರಅರಸ್ ಸಂಕಲನ, ಅನುಷ ಹೆಗ್ಡೆ ನೃತ್ಯ, ಬಾಲಕೃಷ್ಣ ಬರಗೂರು ಸಹ ನಿರ್ದೇಶನವಿದೆ. ರವಿರಾಜ್ ಶೆಟ್ಟಿ, ಅನ್ವಿತ್ ಸಾಗರ್, ರಿಯಾ ಮೇಘನಾ, ಸತ್ಯಜಿತ್, ರಮೇಶ್ ಭಟ್, ಅಪೂರ್ವಶ್ರೀ, ಹೊನ್ನವಳ್ಳಿ ಕೃಷ್ಣ, ಗೋಪಿನಾಥ್ ಭಟ್, ಚೇತನ್ರೈ, ಮಾಣಿ, ರಮೇಶ್ರೈ ಕುಕ್ಕವಳ್ಳಿ, ನವೀನ್ ಬೊಂದೆಲ್ ಹಾಗೂ ಅತಿಥಿ ಪಾತ್ರದಲ್ಲಿಯಕ್ಷಗಾನ ಭಾಗವತರಾದಬಲಿಪ ನಾರಾಯಣ್, ಪಟ್ಲಾ ಸತೀಶ್ ಶೆಟ್ಟಿಅಲ್ಲದೇ ಮಂಗಳೂರಿನ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಅಭಿನಯಿಸಿದ್ದಾರೆ.